ಬೆಳಗುಜಾವದಲಿ

ಬೆಳಗುಜಾವದಲಿ
ಹರಿ ನಿನ್ನ ದರ್ಶಿಸೆ
ನಯನಾನಂದವು|
ಪ್ರಸನ್ನ, ಕರುಣಾಸಂಪನ್ನ
ಹರಿ ನಿನ್ನ ಧ್ಯಾನಿಪೇ
ಮನಸಿಗೆ ಹರ್ಷಾನಂದವು|
ಹರಿ ನಿನ್ನನೆಬ್ಬಿಸುವ ಸುಪ್ರಭಾತವು
ಅದುವೇ ಕರ್ಣಾನಂದವು ||

ಉದಯ ರವಿಯು
ನಿನ್ನ ಗುಡಿ ಗೋಪುರದ
ಕಾಂತಿಯನು ಬೆಳಗುತಲಿ
ದ್ವಿಗುಣಗೊಳಿಸುತಿಹನು|
ಹಕ್ಕಿ ಚಿಲಿಪಿಲಿ ಕಲರವ,
ನದಿಯ ಝುಳುಝುಳು ಗಾನ
ಸಂಗೀತ ಸುಧೆಯನುಣಿಸುತ್ತಿಹುದು||

ವಿಪ್ರರೆಲ್ಲರು ಸೇರಿ ಬಗೆ ಬಗೆಯ
ಪೀತಾಂಬರ ಧರಿಸಿ|
ತಿಲಕ ನಾಮಾದಿಗಳನಿರಿಸಿ
ಸಂಧ್ಯಾವಂದನೆ ಮಾಡಿರಲು|
ವೈಕುಂಠ, ಕೈಲಾಸವೇ
ಧರೆಗಿಳಿದಿಹುದೆನಿಸುತ್ತಿಹುದು||

ವನಿತೆ, ಸುಮಂಗಳೆ
ಮುತ್ತೈದೆಯರೆಲ್ಲರು
ನಾರು ಮಡಿಯನುಟ್ಟು
ಹೆಜ್ಜೆ ಪ್ರದಕ್ಷಣೆಯ ಮಾಡಿರಲು|
ಅತ್ತ ಹವನ ಹೋಮಾದಿ
ಮಂತ್ರ ವೇದಘೋಷ ಮೊಳಗಿರಲು
ಈ ಭುವಿ ಸ್ವರ್ಗವೆನಿಸುತ್ತಿಹುದು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಳಿವಿನ ಅಂಚಿನಲ್ಲಿ ರಾಷ್ಟ್ರ ಪ್ರಾಣಿ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೨೧

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

cheap jordans|wholesale air max|wholesale jordans|wholesale jewelry|wholesale jerseys